#ಸಮಸ್ಯಾಪೂರಣ ಸರವ ಕಾಲಿಗೆ ತೊಡಿಸಿ ಪೋದನು ಒಲವಿನಲಿ ದುರುಳ


ಧರಣಿ ತೊಯ್ದಿರೆ ಮಳೆಯ ರಭಸಕೆ
ಹರಿದಿರಲು ಕೆನ್ನೀರ ಧಾರೆ ಕೆ-
ಸರನು ತುಂಬಿರೆ ಹಾದಿ ಬೀದಿಗೆ ಹೆಜ್ಜೆಯಿಡದಂತೆ
ಹೊರಡಲಾರದೆ ಮಾರುಕಟ್ಟೆಗೆ
ತರುಣಿ ಬೈದಳು ಮಳೆಗೆ ಕಡು ಬೇ
ಸರವ ಕಾಲಿಗೆ ತೊಡಿಸಿ ಪೋದನು, ಒಲವಿನಲಿ ದುರುಳ"

Reply · Report Post